Saturday, August 25, 2012

ತಪ್ಪು

ಒಂದು ಸಣ್ಣ ತಪ್ಪಿನಿಂದ ಮಾತು ಸತ್ತು ಹೋಗಿ.
ಮನಸೆಲ್ಲ ಕಪ್ಪು ಮೋಡ ಕವಿದಂತೆ.
ಆ ಮೋಡ ಸರಿಸಲು ಬರಬೇಕಿನ್ನು ಮುಗುಳ್ನಗೆಯ ರವಿ ಕಿರಣ.
ಇಲ್ಲ ಬರಬೇಕು ಅಳುವೆಂಬ ವರ್ಷಧಾರೆ.
ಮುಗುಳ್ನಗೆ ಬಂದರೆ ತಪ್ಪಿನ ಮುಸುಕನ್ನು ಸರಿಸಿದಂತೆ
ವರ್ಷಧಾರೆ ಬಂದರೆ ತಪ್ಪಿನ ಮುಸುಕನ್ನು ಪುಡಿ ಮಡಿ ಮನವನ್ನೂ ತಣಿಸಿದಂತೆ.
ಮುಗುಳ್ನಗೆ ಇಲ್ಲ ವರ್ಷಧಾರೆ ಯಾವುದಾದರು  ಸರಿ
ಬೇಕಿಲ್ಲ ಈ ಮನಕಿನ್ನು ದುಃಖದ ಈ ಪರಿ

No comments:

Post a Comment