Monday, August 29, 2016

ರಾಮನ ಅವತಾರ ರಘುಕುಲ ಸೋಮನ ಅವತಾರ ಭೂ ಕೈಲಾಸ ಚಿತ್ರದ ಗೀತೆ

ದ್ವಾರಪಾಲರ ಮರಳಿ ಬಳಿಗೊಯ್ವಾ ಕೃಪೆಯೋ
ಜಾರತನ ಸದೆ ಬಡಿವ ಸಂಭ್ರಮದ ನೆಪವೋ
ರಾಮನ ಅವತಾರ ರಘುಕುಲ ಸೋಮನ ಅವತಾರ

ರಾಮನ ಅವತಾರ ರಘುಕುಲ ಸೋಮನ ಅವತಾರ
ನಿರುಪಮಾ ಸಂಯಮ ಜೀವನ ಸಾರ ಹರಿಯುವುದು ಭೂಮಿಯ ಭಾರ.

ದಾಶರತಿಯ ದಿವ್ಯಾತ್ಮವ ತಳೆವ ಕೌಸಲ್ಯೆಯ ಬಸಿರೆನಿತು ಪುನೀತ
ಲೇಸಿಗರೈ ಸಹಜಾತರು ಮೂವರು
ಲಕ್ಷ್ಮಣ ಶತೃಘ್ನ  ಭರತ

ರಾಮನ ಅವತಾರ ರಘುಕುಲ ಸೋಮನ ಅವತಾರ
ನಿರುಪಮಾ ಸಂಯಮ ಜೀವನ ಸಾರ ಹರಿಯುವುದು ಭೂಮಿಯ ಭಾರ.

ತ್ರಿಭುವನಪಾಲಗೆ ನೆಪಮಾತ್ರ ವರಾಗುರು ವಿಶ್ವಾಮಿತ್ರ
ಅಭಯ ಅಹಲ್ಯಾಗೆ ನೀಡುವ ಪಾತ್ರ
ಧರಿಸುವ ಹಾರಿಸುವ ಗಾತ್ರ

ರಾಮನ ಅವತಾರ ರಘುಕುಲ ಸೋಮನ ಅವತಾರ
ನಿರುಪಮಾ ಸಂಯಮ ಜೀವನ ಸಾರ ಹರಿಯುವುದು ಭೂಮಿಯ ಭಾರ.

ಧನುವೊ ಜನಕನ ಮಮತೆಯ  ಕುಡಿಯೊ
ಸೀತೆಯ ಕನ್ಯಾ ಸಂಕಲೆಯೋ
ಧನುಜರ ಕನಸಿನ ಸುಖ ಗೋಪುರವೋ
ಮುರಿವುದು ಮಿಥಿಲಾನಗರದಲ್ಲಿ

ರಾಮನ ಅವತಾರ ರಘುಕುಲ ಸೋಮನ ಅವತಾರ
ನಿರುಪಮಾ ಸಂಯಮ ಜೀವನ ಸಾರ ಹರಿಯುವುದು ಭೂಮಿಯ ಭಾರ.

ಕಪಟ ನಾಟಕನ ಪಟ್ಟಾಭಿಷೇಕ
ಉಪಟಳ ತಾತ್ಕಾಲಿಕ ಶೋಕ 
ಭೀಕರ ಕಾನನ ವಾಸದ ಕುಹಕ
ಲೋಕೋದ್ಧಾರದ ಮೊದಲಂಕ

ಭರತಗೆ ಪಾದುಕೆ ನೀಡುವ ವೇಷ
ಗುರುಜನ ಭಕ್ತಿಯ ಆದೇಶ 
ನರಲೋಕಕೆ ನವನಿಧಿ ಸಂತೋಷ
ಭರವಸೆ ನೀಡುವ ಸಂದೇಶ

ರಾಮನ ಅವತಾರ ರಘುಕುಲ ಸೋಮನ ಅವತಾರ
ನಿರುಪಮಾ ಸಂಯಮ ಜೀವನ ಸಾರ ಹರಿಯುವುದು ಭೂಮಿಯ ಭಾರ. 

ಆಹಾ ನೋಡದೋ ಹೊನ್ನಿನ ಜಿಂಕೆ
ಆಹಾ ನೋಡದೋ ಹೊನ್ನಿನ ಜಿಂಕೆ
ಹಾಳಾಗುವುದಯ್ಯೋ ಲಂಕೆ 
ಹೆಣ್ಣಿದು ಶಿವನುರಿಗಣ್ಣೋ ಮಂಕೆ
ಮಣ್ಣಾಗುವೆ ನೀ ನಿಶ್ಯಂಕೆ


ರಾಮನ ಅವತಾರ ರಘುಕುಲ ಸೋಮನ ಅವತಾರ
ನಿರುಪಮಾ ಸಂಯಮ ಜೀವನ ಸಾರ ಹರಿಯುವುದು ಭೂಮಿಯ ಭಾರ.

ಶರಣು ಶರಣು ಭಾಗವತ್ತೋತ್ತಮ
ಕನ್ನಡ ಕುಲಪುಂಗವ ಹನುಮ
ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ
ಎಂಬುವ ಸತ್ಯ ತಿಳಿಸಮ್ಮ
ಎಂಬುವ ಸತ್ಯ ತಿಳಿಸಮ್ಮ 

ರಾಮ ರಾಮ ಜಯ ರಾಮ ರಾಮ ಜಯ
ರಾಮ ರಾಮ ರಘುಕುಲ ಸೋಮ
ಸೀತೆಯ ಚಿಂತೆಗೆ ಪೂರ್ಣ ವಿರಾಮ
ಲಂಕೆಯ ವೈಭವ ನಿರ್ನಾಮ

ಅಯ್ಯೋ ದಾನವ ಭಕ್ತಾಗ್ರೇಸರ
ಆಗಲಿ ನಿನ್ನೀ ಕಥೆ ಅಮರ
ಮೆರೆಯಲಿ ಈ ಶುಭ ತತ್ವ ವಿಚಾರ
ಪರಸತಿ  ಬಯಕೆಯ ಸಂಹಾರ

ರಾಮನ ಅವತಾರ ರಘುಕುಲ ಸೋಮನ ಅವತಾರ
ರಾಮನ ಅವತಾರ ರಘುಕುಲ ಸೋಮನ ಅವತಾರ










No comments:

Post a Comment