Saturday, August 31, 2024

ಆರತಿ ಹಾಡುಗಳು-2

 4. ಶ್ರೀ ತುಳಸಿ ಮಧ್ಯದೊಳಗಿರುವ ಕೃಷ್ಣ 
    ನಾ-ಬಳಸಿ ನೋಡುವ ಬನ್ನಿರೇ-1 
   ಮಂಗಳಾರತಿ ತಂದಿ ಬೆಳಗಿರೆ ರಂಗನಾಥನ ಪ್ರಿಯೆಗೆ! 
   ಸ್ವಾಮೀ ರಂಗನಾಥನ ಪ್ರಿಯೆಗೆ॥ 
   ಕಡಲಸುತ ಪಿಡಿದು ಬಲು ಬೆಡಗಿನಿಂದಲೆ ಬಂದಿರೆ! 
   ಸ್ವಾಮೀ ಬಲು ಬೆಡಗಿನಿಂದಲೇ ಬಂದಿರೆ|| ಮಂಗಳಾರತಿ॥ 
   ಬಿಲ್ಲ ಹಬ್ಬಕೆ ಅಲ್ಲಿ ಪೋಗಿ ಮಾವ ಕಂಸನಾ ಕೊಂದನಾ।
   ಹಾಸು ಮಂಚವ ಲೇಸು ತಲೆದಿಂಬು| 
   ಅಕ್ಕಿ ಹಸಿಗೆ ಹಾಸಲೇ॥ ||ಮಂಗಳಾರತಿ॥

5.ಮಂಗಳಾರತಿ ಎತ್ತು ಬೆಳಗುವೆ! 
   ರಂಗ ರುಕ್ಕಿಣಿ ದೇವಿಗೆ ಮಂಗಳಾಂಗಿಯರೊಡನೆ ಕೂಡಿ ಕ್ರಿಯೆಯಾಡಿದ ದೇವಗೆ 
   ಮರುಪಿನೊಳು ಕಾಳಿಂಗನ ಹೆಡೆ ಪಿಡಿದು ಸೆಳೆದಾ ಸ್ವಾಮಿಗೆ 
   ಒಡನೆ ಬೇಡಿದ ಅಕ್ಯ ಪಾತ್ರೆ|ಸಲಹಿದ ಸ್ವಾಮಿಗೆ ಮಂಗಳಾರತಿ ಎತ್ತಿ ಬೆಳಗುವೆ॥
  ಬಾಯೊಳು ಬ್ರಹ್ಮಾಂಡ ಬೀರಿದ ಮಾಯಗಾರ ಕೃಷ್ಣಗೆ 
  ರಾಮ ಪಾರ್ವತಿಗೆ ದೇವತೆಯಾದ ದೇವತೆಯ ಪುತ್ರಗೆ| 
  ನಂದಗೋಕುಲದೊಳು ಬೃಂದಾವನದೊಳು ಆಡುತ್ತಿರುವ ಕೃಷ್ಣಗೆ
  ಇಂದು ಬೇಡಿದ ವರಗಳನ್ನೆಲ್ಲಾ ಕೊಟ್ಟುರಕ್ಷಿಪ ದೇವಗೆ 
  ಎತ್ತಿ ಬೆಳಗಿರೆ ರಂಗ ರುಕ್ಕಿಣಿ ದೇವಿಗೆ||

6.ರಾಜಾಧಿರಾಜ ಪಾಂಡವರಿಗೆ ತೇಜದಿ ಬೆಳಗುವ ಧರ್ಮದ ರೂಪಗೆ
   ಮೂಜಗದೊಳು ಕೃತಿಕ ಲೋಪಗೆ
   ರಾಜವದನೆಯರು ಐಗೋವದಿಂದಲಿ ರಚಿಸಿದರಾರತಿಯಾ ಬೆಳಗೀರೆ....!!
   ಐವರು ಸತಿಯವರು ತೋಳು ಮುತ್ತಿನ ಸೈರವಗೆ ಮೈದೊಳೆದಿಟ್ಟು!
   ದೀವಿಗೆ ಬೆಳಕಿನಲಿ ಕುಶಲದಾರತಿಯಾ ಬೆಳಾಗಿರೆ....!
   ಸೀರೆ ಸೀರೆಯ ಸೆಳೆದು| ಜಾಯ ಮುತ್ತಿನ ಸೇಸೆಯ ತಳೆದು ಕಾಲಮದಿಗೆ ಗೆಜ್ಜೆಯ ಗಲಿ ಗಲಿ| 
   ಎಂದೆನಿಸುತ್ತಾ ಮೇಲಾಗ್ರದಲಿ ಪಾಡುತ ಕಮಲದಾರತಿಯಾ ಬೆಳಾಗಿರೇ....|

ಆರತಿ ಹಾಡುಗಳು-1

 1. ಮಂಗಳಾರತಿ ಎತ್ತಿದರು ರಂಗೆಯರು ರಂಗನಾಥನಿಗೆ
    ಸಂಭ್ರಮದಿಂದಲಿ| ಮೂರು ಲೋಕವನು ಒಲಿದು ಪಾಲಿಸುವವಗೆ 
   ನೀಲಮೇಘ ಶ್ಯಾಮಗೆ ಕರುಣಪಾಲ ಕಮಲನಾಭನಿಗೆ
   ಸುರಚಿರ ಗಂಭೀರ ಹರಿಗೆ ರಂಗನಾಥನಿಗೆ 
   ಮಂಗಳಾರತಿ ಎತ್ತಿದರು ನಾರಿಯರು||

2.ನೀರಜಭವೆಗೆ ಆರತಿಯ ಸೇರಿ ಬೆಳಗೀರೆ!
 ಕ್ಷೀರವಾರಿಧಿ ಸುತೆಗೆ ಸಾರಸಾಕ್ಷಿಗೆ 
ನಾರದಾದಿ ಮುನಿಗಳಿಗೆ ಮಾರಜನಕನ ರಾಣಿಗೆ ಉರಗವೇಣಿ!
 ಮಧುರವಾಣಿಗೆ ಅಂಗಜಾತೆ ಜನನಿಗೆ ವರಭಂಗ 
ಕುಂತಳಿಗೆ ನಿತ್ಯ ಮಂಗಳಾಂಗಿಗೆ 
ಆರತಿಯ ಸೇರಿ ಬೆಳಗಿದರು ನಾರಿಯರು||

3. ಆಲದೆಲೆಯ ಮೇಲೆ ಲೋಲನಾಡುತ ಬಂದಾ| 
ಲೋಲಾಕ್ಷನು ಪತಿಯಾಗಬೇಕೆಂದು ಎತ್ತಿದಳಾರತಿಯಾ
 ಶ್ರೀ ಶಿವನಿಗೆ ಶ್ರೀ ಸತ್ಯಭಾಮೆಯು ಬೆಳಗಿದಳಾರತಿಯಾ
ಮಾವ ಕಂಸನ ಕೊಂದಾ-ಶ್ರೀ ಕೃಷ್ಣ ಪತಿಯಾಗಬೇಕೆಂದು ಎತ್ತಿದಳಾರತಿಯಾ 
ಶ್ರೀ ಶಿವನಿಗೆ ಬೆಳಗಿದ ಳಾರತಿಯಾ॥ 
ಸುರರೆಲ್ಲಾ ಕೂಡಿ ಸಂಗೀತವ ಹಾಡಿ ಸಂಗಳ ಶಿವನಿಗೆ! ಎತ್ತಿದ ರಾರತಿಯಾ॥
 ಮುತ್ತೈದೆಯರೆಲ್ಲರು ಸೇರಿ ಮುತ್ತಿನ ಆರತಿಯ
ಮುತ್ತಾಕ್ಷಿ ಶಿವನಿಗೆ ಪತಿಯಾಗಬೇಕೆಂದು ಎತ್ತಿದರಾರತಿಯಾ




Friday, August 30, 2024

ಗೋಡೆಯಲ್ಲಿ ಹಸೆ ಬರೆಯುವಾಗ ಶೋಭಾನೆಗಳು

ಅಪ್ಪಾ-ಮಕ್ಕಳು ಕೂಡಿ| ತುಪ್ಪಾ ಬೋನವನುಂಡು..!
ಉಕ್ಕಿನುಳಿಬಾಜು ಹೆಗಲೇರಿ॥ 
ಹೊರಟಾರು ಒಳೊಳ್ಳೆ ಮರ ಕಡಿವಾ ಕೆಲ-ಸಕ್ಕೆ|| 
ಅಣ್ಣಾ ತಮ್ಮಂದಿರು ಕೂಡಿ। ಹಾಲು ಬೋನವನುಂಡು| 
ಚಿನ್ನಾದುಳಿಬಾಜು ಹೆಗಲೇರಿ ಹೊರಟಾರು! 
ಒಳೊಳ್ಳೆ ಮಣೆ ಕಡಿವಾ ಕೆಲ-ಸಕ್ಕೆ|| 
ಆಲದ ಮಣೆಗೇಳೀ-ಆರೇಳು ದಿನವಾದೊ
1 ಆಲದ ಮಣೆ ಯಾಕೆ ಬರಲಿಲ್ಲಾ? 
ಬೆಡಗಿನ ಮಣೆಯು ಊರಿಗೆ ಬಿಟ್ಟ ಹೋರಿನ ಹೊಡ-ಕೊಡೀ-|| 
ಊರಿಗೆ ಬಿಟ್ಟ-ಹೋರಿನ ನಾವೇಗೆ ಹೊಡಕೊಡಲೊ? 
ಜಾಮದಲೆದ್ದು ಕೆಲ-ಸಕ್ಕೆ ಹೊರಟಾಗ ಊರಿನ-ತುಂಬಾ ಬೆಳಕಾಯ್ತು|| 
ಹಲಸಿನ ಮಣೆಗೇಳಿ ಹತ್ತೆಂಟು ದಿನವಾದೋಹಲಸಿನ ಮಣೆಯಾಕೆ ಬರ-ಲಿಲ್ಲಾ? 
ಬೆಡಗಿನ ಮಣೆಯು ಊರಿಗೆ ಬಿಟ್ಟೆಮೈನ ಹೊಡ-ಕೊಡೀ॥ 
ಊರಿಗೆ ಬಿಟ್ಟೆಮ್ಮನ ನಾವೇಗೆ ಹೊಡಕೊಡಲೊ? 
ಜಾಮದಲೆದ್ದು... ಮಲ್ಲಿಗೆ ಮುಡಿವಾಗ ಬೆಳ-ಗಾದೋ।। 
ಹಸೆ ಬರೆವಾ-ಜಗುಲಲ್ಲಿ! ಏನುಂಟು ಏನಿಲ್ಲ... ಆ... ಹಣ್ಣಡಿಕೆ ಸಿಪ್ಪೆ ಮೊದಲಿಲ್ಲಾ| 
ಹಣ್ಣಡಿಕೆ ಸಿಪ್ಪೆ ಮೊದಲಿಲ್ಲದ ಕೋಣೆಯಲೀ ಹೆಸೆ ಬರೆವಾ ಕೋಣೆ ಬಲೂ-ಇಂಬು|| 
ಹಸೆ ಬರೆವಾ ಜಗುಲಲ್ಲಿ ಏನುಂಟು ಏನಿಲ್ಲಾ- ಆ... ಯಾಲಕ್ಕಿ ಸಿಪ್ಪೆ ಮೊದಲಿಲ್ಲಾ। 
ಯಾಲಕ್ಕಿ ಸಿಪ್ಪೆ ಮೊದಲಿಲ್ಲದ ಜಗಿಲಲ್ಲೀ ಹಸೆ ಬರೆವಾ ಜಗುಲಿ ಬಲೂ-ಇಂಬು|| 
ಹಸೆಯಾ ಮೇಲೆರಡು ಕಳಸವಾ ತಂದಿಡಿರಿ| 
ಮಗಳಿಗು ಮಹಾದೇವಂಗು ಕುಂಡಲದಾ ಬಣ್ಣಾ ಬರೀರಣ್ಣಾ
 ಹಸೆಯಾ ಬರೆಯಲಿಕೆ ಋಷಿಗಳು ನಾವು ಬಂದೇವು ಚಂದಾಗಿ ಬರೆಯಿರಿ ಚೌಕವಾ|| 
ಹಸೆಯಾ ಬರೆಯಲಿಕೆ ಇನ್ಯಾರು ಬರಬೇಕು? 
ತಾಯಿ ಸೋದರದ ಹಿರಿಭಾವ ತಾಯಿ
ಸೋದರದ ಹಿರಿಭಾವ ಬರಬೇಕೆಂದು ಚಂದಾಗಿ ಬರೆಯಿರಿ ಚೌಕವಾ||
ಸೂರದೇವರ ಅಕ್ಕ ಬರುತ್ತಾಳೆಂದು ಚಂದಾಗಿ ಬರೆಯಿರಿ ಚೌಕವಾ||
 ಚಂದ್ರದೇವರ ತಂಗಿ ಬರುತಾಳೆಂದು ಚಂದಾಗಿ ಬರೆಯಿರಿ-ಚೌಕಾಗಿ|

ಆ ಬಣ್ಣಾ... ಬರಿರಣ್ಣಾ ಈ ಬಣ್ಣಾ... ಬರಿರಣ್ಣಾ ಸೂರ್ಯದೇವರ ಬಣ್ಣಾ....ಬರೀರಣ್ಣಾ||
ಆ ಬಣ್ಣಾ... ಬರಿರಣ್ಣಾ... ಈ ಬಾ... ಬರಿರಣ್ಣಾ ಚಂದ್ರದೇವರ ಬಣ್ಣಾ ಬರೀರಣ್ಣಾ||
ಆ ಬಣ್ಣ ಬರೀರಣ್ಣಾ- ಈ ಬಣ್ಣಾ... ಬರಿರಣ್ಣಾ ಗಿಳಿರಾಮರ ಬಣ್ಣಾ ಬರೀರಣ್ಣಾ||
ಮಾವನವರ ಮನೇಲಿ ಬಾವ ಮಕ್ಕಳು ಹೆಚ್ಚು! ಹಸೆನೋಡಿ -ನಿಮ್ಮ-ಜರೆದಾರು| 
ಹಸೆ ಬರೆದವರಿಗೆ ಏನೇನು ಉಂಬಳಿ?-ಸಣ್ಣಕ್ಕಿ ನಯಲು
ಸಮಾ ಉಂಬಳಿ....
ಹಸೆ ಬರೆದವರಿಗೆ ಏನೆಲ್ಲಾ ಉಡುಗೊರೆ?-ಸಾಲು ಪಟ್ಟೆಗಳು ಸಮಾ-ಉಡಿಗೊರೆ....|
ಹಸೆ ಬರೆದವರಿಗೆ ಯಾವ್ಯಾವ ವೀಳ್ಯಗಳು- ತಟ್ಟೇಲಿ ವೀಳ್ಯವ ಮಡಗೀ

Thursday, August 29, 2024

ಗಂಗೆ ಪೂಜೆ ಶೋಭಾನೆಗಳು-2

 ಒಂದೆಲೆ ಒಂದಡಿಕೆ ಒಂದೊಂದು ಗಂಧದ ಬೊಟ್ಟು!
 ಗಂಗೆ ಗೌರಮ್ಮನಾ ಶಿವಪೂಜೆಗೆ! ಗಂಗೆ ಗೌರಮ್ಮರು 
ಶಿವಪೂಜೆ ಮಾಡುವಾಗ ಆಕಾಶದ ಘಂಟೆ ಘಣಿರೆಂದು ಕೇಳಲು 
ಗಂಧದಾ-ಹೊಗೆಯೂ ಘಮ-ಘಮಾ॥

ಎರಡೆಲೆ ಎರಡಡಿಕೆ! ಒಂದೊಂದು ಗಂಧದ ಬೊಟ್ಟು 
ಗಂಗೆ ಗೌರಮ್ಮನಾ ಶಿವಪೂಜೆಗೆ ಗಂಗೆ ಗೌರಮ್ಮನ 
ಶಿವಪೂಜೆ ಮಾಡುವಾಗ ಆಕಾಶದ ಘಂಟೆ ಫಣಿರೆಂದು ಕೇಳಲೂ। 
ಕರ್ಪೂರದ ಹೊಗೆಯೂ ಘಮ-ಘಮಾ

ಒಂದಚ್ಚು-ಬೆಲ್ಲಾ! ಒಂದು ತೆಂಗಿನ ಕಾಯಿ! ಎಳ್ಳು ಬಾಳೆ ಹಣ್ಣು 
ಗಂಗೆ ಗೌರಮ್ಮರಾ ಶಿವಪೂಜೆಗೆ ಗಂಗೆ ಗೌರಮ್ಮರು 
ಶಿವಪೂಜೆ ಮಾಡುವಾಗ-ಆಕಾಶದ ಘಂಟೆ ಘಣಿರೆಂದು ಕೇಳಲು 
ಸಾಂಬ್ರಾಣಿ ಹೊಗೆಯೂ ಘಮ-ಘಮಾ

Wednesday, August 28, 2024

ಗಂಗೆ ಪೂಜೆ ಶೋಭಾನೆಗಳು

 ಒಂದಲೆ ಒಂದಡಿಕೆ ಒಂದೊಂದು ಗಂಧದ ಬೊಟ್ಟು, 
ಗಂಗೆ ಗೌರಮ್ಮನ ಗುಂಭಕ್ಕೆ ಶಿವಪೂಜೆ ಶಿವಪೂಜೆ ಶಿವಗಿರಲಿ 
ಜೀವ ಪೂಜೆ ದೇವಗಿರಲಿ ಗಂಗಮ್ಮನ ಗುಂಭಕೇ-ದೇವ-ಪೂಜೆ। 
ಕಾಗೆ ಮುಟ್ಟದ ನೀರು! ಜೋಗಿ...ಸುಳಿಯದ ನೀರು! 
ಪಕ್ಷ ಪಾತಾಳದ ಪನ್ನೀರು (ಎರಡಲೆ, ಮೂರೆಲೆ, ನಾಲ್ಕೆಲೆ, ಐದೆಲೆ ಇಷ್ಟರ ತನಕ ಹೇಳುತ್ತಾ, ಗುಂಬಕ್ಕೆ ಸುತ್ತು ಬರುವುದು)
ಅಜ್ಜಯ್ಯ ಕಟ್ಟಿಸಿದ ಅಶ್ವಥದ ಕಟ್ಟೆಯುಂಟೆ ಅದಕೊಂದು ಸುತ್ತು ಬಾರೆ
 ಗಿರಿದೂರ ಮಠದೂರ ದೂರದಿಂದಲೆ ಸ್ವಾಮಿಯವರ 
ಪಾದಕೆ ಶರಣೆಂದೆನು|| ಸ್ವಾಮಿಯವರ ಪಾದಕೆ ಶರಣೆಂದೆನು 
ಅಪ್ಪಯ್ಯ ಕಟ್ಟಿಸಿ ಹಲಸಿನ ಕಟ್ಟೆಯುಂಟೆ ಅದಕೊದು ಸುತ್ತು ಬಾರೆ
 ಗಿರಿದೂರ ಮಠದೂರ ದೂರದಿಂದಲೆ ಸ್ವಾಮಿಯವರ
 ಪಾದಕೆ ಶರಣೆಂದೆನು ಸ್ವಾಮಿಯವರ ಪಾದಕೆ ಶರಣೆಂದೆನು!
 ಅಣ್ಣಯ್ಯ ಕಟ್ಟಿಸಿದ ತೆಂಗಿನ ಕಟ್ಟೆಯುಂಟೆ! ಅದಕೊಂದು ಸುತ್ತು ಬಾರೆ! 
ಬಾವಯ್ಯ ಕಟ್ಟಿಸಿದ ಬಾವಿಯ ಕಟ್ಟೆಯುಂಟೆ! ಅದಕೊಂದು ಸುತ್ತು ಬಾರೆ! 
ಗಿರಿದೂರ ಮಠದೂರ ದೂರದಿಂದಲೆ ಸ್ವಾಮಿಯವರ 
ಪಾದಕೆ ಶರಣೆಂದೆನು! ಸ್ವಾಮಿಯವರ ಪಾದಕೆ ಶರಣೆಂದೆನು|

Tuesday, August 27, 2024

ಆರತಿಯ ಶೋಭಾನೆಗಳು

 ಆರತಿಯ ಶೋಭಾನೆಗಳು

(ಆರತಿ ಎತ್ತುವಾಗ ಹೇಳುವ ಶೋಭಾನೆಗಳು)

ಚಪ್ಪರದಡಿ ಬರುವಾಗ ಅಥವಾ ಅಥಿತಿ ಸತ್ಕಾರ ಆದ ಮೇಲೆ ಹೇಳುವ ಶೋಬಾನೆಗಳು

ರಾಜಿಪ ಮಣಿಮಯ ರತ್ನ ಪೀಠದಲಿ ರಾಜಾಧಿರಾಜ ಶ್ರೀರಾಮ ಕುಳ್ಳಿರಲೂ 
ರಾಜೀವಾಂಬಕಿ ಸೀತೆಯಚದೊಪ್ಪಿರಲೂ
 ರಾಜವದನೆಯರು ಹರಿವಾಣದಲಿ ರಾಜೀಸುವಾರತಿಯ ಬೆಳಗೀರೆ ಶೋಭಾನೆ 
ಕನಕ ಮಂಡಲ ಕುಂಡಲಾ ಲಂಕೃತೆಗೆ ಕನಕಧರಣಾದಿ 
ಕಮಲನಯನನಿಗೆ ಕನಕದಾರತಿಯ ಬೆಳಗೀರೆ ಶೋಭಾನೆ 
ಮುತ್ತಿನೋಲೆಯ ಹಾರಪದಕವನ್ನಿಟ್ಟವಳೂ
 ಮುತ್ತಿನ ಬೊಟ್ಟು ಮೂಗುತಿ ಇಟ್ಟವಳೂ 
ಮುತ್ತಿನಾ ಕಡಗ ಮುಂಗೈಯೊಪ್ಪಿರಲೂ 
ಮುತ್ತೈದೆಯರೂ ರಥೋತ್ತಮ ಸೀತೆಗೆ ಮುತ್ತಿನಾರತಿ

ಬೆಳಗೀರೆ ಶೋಭಾನೆ.
ಆರತಿಯೆತ್ತರೆ ನಾರಿಯರೆಲ್ಲರೂ ಮಾರ ಸುಂದರಗೆ
ಸುರ ನಾರಿಯಲ್ಲೆರೂ ಹರುಷವ ತಾಳುತ ಕರುಣಾಕರನಿಗೆ 
ನೀರೊಳು ಮುಳುಗಿ ಭಾರವ ಪುತ್ತಿಹ ಧಾರಣಿಯಮತಂತೆ 
ಘೋರ ನರಸಿಂಹ ರೂಪವ ತಾಳಿದ ಬಾಲಕನನ್ನು ಪೊರೆದ
ಆರತಿ ಎತ್ತುವೆ ಬಾಲಕನಾಗಿ ಬಲಿಯದಾನವತೆಯ ಶಿರತದಿಂದ 
ಸೇತುವೆ ಬಂದಿಸಿ ಸೀತೆಯ ಕೂಡಿದ ಶ್ರಿ ರಘುರಾಮನಿಗೆ
 ಆರತಿ ಎತ್ತುವೆ ತ್ರಿಪುರ ಸತಿಯರ ವೃತವನ್ನೆ ಕೆಡಿಸಿ 
ಚಪಲನೆಂದೆನಿಸಿ ವಾಜಿನೇರಿ ರಾಜಿಪ ವೀರರಿಗೆ ರಾಜೀವ 
ನೇತ್ರತೆಯರು ಆರತಿ ಎತ್ತುವೆವು 
ಆರತಿಯೆತ್ತಿರೆ ವಾರಿಜಮುಖಿ ಸೀತಾದೇವಿಗೆ
 ಹದಿನಾಲ್ಕು ಲೋಕವಾಳುವ ಶ್ರೀರಾಮಚಂದ್ರಗೆ
 ಹರಡಿ ಕಂಕಣ ಕಮಲದೊರೆಸರಿಗೆ 
ಸರಗಳ ವಂಕಿಬಾಪುರಿ ತೊಟ್ಟ ಸೀರೆ 
ಖೈಠಣಿ ಕುಪ್ಪಸ ಗೋಡೆ ರಾಕಟ ಚಂದ್ರಕತ್ತಿಗೆ
 ಹದಳು ಭಮಗಾರ ದುಂಡು ಮಲ್ಲಿಗೆ ಸಂಪಿಗೆ ಸಂಪಿಗೆ 
ಅರಳು ಶೃಂಗಾರ ಭೋಮಿಯಾಳ್ವ ರಾಜದೊರೆ 
ರಾಮಚಂದ್ರಗೆ ಭೂಮಿದೇವಿ ಮಗಳು ಸೀತೆ ನಾರಿ ಜಾನಕಿ ಆರತಿ

ಸೋಬಾನೆ ಹಾಡುಗಳು-ಆರತಿಯ ಹಾಡುಗಳು

 ಬೆಳಗುವೆ ನಾ ಮಂಗಳಾದಾರತಿಯಾ ಬೆಳಗೂವೆನಾರತಿ
ಕಪಿವರ್ಯ ಮಾರುತಿ ಬಲವಂತ ಶ್ರೀರಾಮನದೂತನಿಗೆ
ಪೂರ್ಣಮಯ ಬೆಲಗಿನಲಿ ಪುಟ್ಟಿದಾಕ್ಷಣದಲ್ಲಿ
ಸೂರ್ಯನ ಪಿಡಿಯಲು ಮೋದವಗೆ ತ್ರೇತಾಯುಗದಲ್ಲಿ
ನೀ ಕಲಿತನ ತೋರುತ ಲೋಕ ಪ್ರಸಿದ್ದಿಯ ಪಡೆದವಗೆ 
ಶರಧಿಯ ದಾಟುತ ಧರಣಿಯ ನಗಳಿಗೆ ರಾಮ ಮುದ್ರಿಕೆಯನ್ನು
 ತೋರಿಸಿದೆ, ದಶಮುಖನೆದುರು ದಶಬಲ ತೋರುತ 
ಲಂಕೆಗೆ ಬೆಂಕಿಯನ್ನಿಟ್ಟವಗೆ ಕಷ್ಟವ ಸಹಿಸುತ
ರಾಮ ಸೇವೆಯ ಸಲಿಸಿದ ಗಾಂಗೇಯ ವರಪ್ರಭೂಗೆ
ಭಕುತರ ಇಷ್ಟಾರ್ಥವನ್ನೇ ನಿತ್ಯ ನೀಡುವ 
ಚಿರಂಜೀವಿಯಾಗಿರುವ ಹನುಮಂತನಿಗೆ ಆರತಿ.


Monday, August 26, 2024

ಸೋಬಾನೆ ಹಾಡುಗಳು - ಎಣ್ಣೆ ಅರಿಶಿನ ಆಗಿ ಸ್ನಾನ ಮಾಡಿ ಬರುವಾಗ ( (ವಧುವಿಗೆ)

 ಆರತಿಯೆತ್ತಿರೆ ವಾರಿಜಮುಖಿ ಸೀತಾದೇವಿಗೆ 
ಹದಿನಾಲ್ಕು ಲೋಕವಾಳುವ ಶ್ರೀರಾಮಚಂದ್ರಗೆ 
ಹರಡಿ ಕಂಕಣ ಕಮಲದೊರೆಸರಿಗೆ 
ಸರಗಳ ವಂಕಿಬಾಪುರಿ ತೊಟ್ಟ ಸೀರೆ 
ಪೈಠಣೀ ಕುಪ್ಪಸ ಗೊಂಡೆ ರಾಕಟ ಚಂದ್ರಕತ್ತಿಗೆ
 ಹದಳು ಭಮಗಾರ ದುಂಡುಮಲ್ಲಿಗೆ ಸಂಪಿಗೆ 
ಅರಳು ಶೃಂಗಾರ ಭೋಮಿಯಾಳುವಾ ರಾಜದೊರೆ
ರಾಮಚಂದ್ರಗೆ ಭೂಮಿದೇವಿ ಮಗಳ ಸೀತೆ ನಾರಿ ಜಾನಕಿ ಆರತಿ 

Saturday, August 24, 2024

ಸೋಬಾನೆ ಹಾಡುಗಳು - ಎಣ್ಣೆ ಅರಿಶಿನ ಆಗಿ ಸ್ನಾನ ಮಾಡಿ ಬರುವಾಗ (ವರನಿಗೆ)

 ಆರತಿಯೆತ್ತಿರೆ ನಾರಿಯರೆಲ್ಲರೂ ಮಾರಸುಂದರಗೆ
ಸುರ ನಾರಿಯರೆಲ್ಲರೂ ಹರುಷವ ತಾಳುತ ಕರುಣಾಕರನಿಗೆ
ನೀರೊಳು ಮುಳುಗಿ ಭಾರವ ಪುತ್ತಿಹ ಧಾರಣಿಯನ್ಮತಂತೆ
ಘೋರ ನರಸಿಂಹ ರೂಪವ ತಾಳಿದ ಬಾಲಕನನ್ನು ಪೊರೆವ
ಆರತಿ ಎತ್ತುವೆ ಬಾಲಕನಾಗಿ ಬಲಿಯದಾನವತೆಯ ಶಿರತದಿಂದ 
ಸೇತುವೆ ಬಂಧಿಸಿ ಸೀತೆಯ ಕೂಡಿದ ಶ್ರೀ ರಘುರಾಮನಿಗೆ
ಆರತಿ ಎತ್ತುವೆ ತ್ರಿಪುರ ಸತಿಯರ ವೃತವನ್ನೇ ಕೆಡಿಸಿ
ಚಪಲನೆಂದೆನಿಸಿ ವಾಜಿನೇರಿ ರಾಜಿಪ ವೀರರಿಗೆ ರಾಜೀವ
ನೇತ್ರತೆಯರು ಆರತಿ ಎತ್ತುವೆವು.


ಸೋಬಾನೆ ಹಾಡುಗಳು - ಅರಸಿನೆಣ್ಣೆ ಶೋಭಾನೆ

 ಜಯ ಜಯ ಲಕ್ಷ್ಮಿ ಪ್ರಿಯ 
ಎನ್ನರಸ ಘನ್ನರಸ ಎನ್ನ ಪ್ರಾಣದ ಅರಸಾ
ನಿಮ್ಮ ಮುಖವ ತನ್ನೀ ಅರಸಿನ ಹಚ್ಚುವೆನು 
ಉಣ್ಣದೆ ಮೆಲ್ಲನೆ ಪೋಗಿ ಕಣ್ಣಿಗೆ ಬೀಳದೆ ಕದ್ದು 
ಬೆಣ್ಣೆ ತಿನ್ನುವ ಮುಖಕ್ಕೆ ಅರಸಿನ ಹಚ್ಚುವೆನು 
ಅಂಜದೆ ಹೇಸಿಗೆಯಾದ ಕಂಜನಾಭನ ಶಬರೀ ಎಂಜಲ ಕೊಳ್ಳುವ ಕೈಗೆ
ಅರಸಿನ ಹಚ್ಚುವೆನು  ವಲ್ಲಭ ನೀನವನ ಕೈಲಿ ಕಲ್ಲಲಿ ತಾಡಿತವಾದ 
ಬಲ್ಲಿದ ನಿಮ್ಮಯ ಹಣೆಗೆ ಕುಂಕುಮ ಹಚ್ಚುವೆನು 

ಎದೆ ಮೇಲೊಬ್ಬಳು ಇರಲು ಹದಿನಾರು ಸಾವಿರದ ಸುದತಿಯರಪ್ಪಿದ
ಎದೆಗೆ ಪರಿಮಳ ಹಚ್ಚುವೆನು ಹಗಲೆಲ್ಲಾ ಗೋಪಿಯರ
ಹೆಗಲ ಮೇಲಿಟ್ಟಿರುವ ಸುಗುಣ ನಿಮ್ಮಯ ಕೈಗೆ ಗಂಧವ 
ಹಚ್ಚುವೆನು ಗಂಧ ಪರಿಮಳ ಮಾಲೆಯಿಂದಲಂಕರಿಸುತಲಿ ವಂದನೆಯ
ಮಾಡಿದಳು ಒಂದೇ ಮನಸಿನಲಿ ಇಂಥ ಮಾತುಗಳೆಲ್ಲಾ ಅಂತಕರಣದಿಂದ
ನುಡಿದೆ ಸ್ವಾಂತಕ್ಕೆ ತರಬೇಡ ನಂತಾಗಾಧಿಶನೇ ಅರಸಿನ ಹಚ್ಚುವೆನು.

Saturday, August 17, 2024

ಸೋಬಾನೆ ಹಾಡುಗಳು - ಹಸೆಗೆ ಕರೆಯುವ ಸೋಭಾನೆಗಳು

ಹಸೆಗೆ ಕರೆಯುವ ಸೋಭಾನೆಗಳು
ಬಾರೋ ಹಸೆಗೆ ಈಗ ಸುಂದರಾಂಗನೆ ಬೇಗ 
ಬಾರೋ ಹಸೆಗೆ ಈಗ ಬಾರೋ ಬಂಗಾರ 
ಮಂಟಪವಾ ಶೃಂಗಾರ ಮಾಡಿ ಸಂಗೀತವಾ 
ಮಾಡಿ ಶೃಂಗ ನಾಯಕಿಯರು ಬಾರೋ ಹಸೆಗೆ 
ಸುರ ಚರಭರಣಂಗಳೂ ಲಾಲಿಸು ದೇವಾ 
ಸುರಪುರ ಮಂದಿರ ಹಿರಿಯ ಹಸೆಗೆ ಬಾರೋ 
ಈಗ ಮುತ್ತೈದೆಯರು ಸುತ್ತುಮುತ್ತಲು ಕೂಡಿ 
ಮುತ್ತಿನಾರತಿ ಕೈಯಲೆತ್ತಿ ಕಾದಿರುವರು ಬಾರೋ 
ಹಸೆಗೆ ಈಗ ಸುಂದರಾಂಗನೆ

ಬಾರೋ ಹಸೆಗೆ ಜನಕ ಸುತೆಯ ಪ್ರೀತಿ
 ರಾಮನೆ ಬಾ ಹಸೆಗೆ ಜನಕಸುತೆಯ ಪ್ರೀತ 
ಮಂದಗಮನೆಯರು ಚಂದದಿ ಕರೆದರು
 ಇಂದಿರೇಶನ ನೀನು ಇಂದು ನೀ ಬಾ 
ವಾರಿಜವದನೆಯರು ಲೀಲೆಯಿದಂ ಕರೆವರು
ಸಾರಿ ಶೃಂಗಾರ ತೀರ್ಪ ಸಾರಸಾಕ್ಷನೆ ಬಾ ಬಾ 
ಕೆತ್ತಿದ ಪದಕವು ಚಿತ್ತದ ರಂಗಕಳೆಲ್ಲ ಧರಿಸಿ ಮೆರೆವ 
ನಮ್ಮ ವಿಠಲ ಬಾ ಬಾ ಹಸೆಗೆ ಜನಕ ಸುತೆ ಪ್ರೀತ 
ಸುಂದರಾಂಗ ಬಾರೋ ಹಸೆಗೆ ಇಂದಿರೇಶ ಬಾ 

Friday, August 16, 2024

ಗೌಡ ಸಂಸ್ಕೃತಿ- ಮದುವೆ ಕರಾರು ಪತ್ರ(ಮಾದರಿ ಲಗ್ನಪತ್ರಿಕೆ)

 ವೀಳ್ಯ ಶಾಸ್ತ್ರ ದಿನ ಎರಡು ಕಡೆಯವರು ಬರೆದು ರುಜು ಹಾಕಲಾದ ಪತ್ರ (ಇದನ್ನು ಲಗ್ನ ಪತ್ರಿಕೆ ವೀಳ್ಯದಲ್ಲಿ ಇಟ್ಟು ಉಭಯ ಕಡೆಯವರಿಗೆ ಕೊಡುವುದು).

                                                       (ಮಾದರಿ ಲಗ್ನಪತ್ರಿಕೆ)
                                                    ||ಶ್ರೀ ಕುಲದೇವತಾ ಪ್ರಸನ್ನ||

ಸನ್ ಎರಡು ಸಾವಿರದ........ಇಸವಿ.......ತಿಂಗಳು ........ತಾರೀಕು
..............ಜಿಲ್ಲಾ............ತಾಲೂಕು.............ಗ್ರಾಮದ ........ಮನೆ .........ರವರ ಅನುಮತಿ ಮೇರೆಗೆ.........
ಪುತ್ರಿ ಸೌಭಾಗ್ಯವತಿ...............ಎಂಬ ವಧುವನ್ನು.............ಜಿಲ್ಲಾ............ತಾಲೂಕು.............ಗ್ರಾಮದ ........ಮನೆ .........ರವರ ಅನುಮತಿ ಮೇರೆಗೆ.........ರವರ ಪುತ್ರ ಚಿರಂಜೀವಿ ..................ಎಂಬ ವರನಿಗೆ ಪಾಣಿಗ್ರಹಣ ಮಾಡಿ ಕೊಡುವುದಾಗಿ ಗುರುಹಿರಿಯರಿದ್ದು ನಿಶ್ಚಯಿಸಿರುತ್ತೇವೆ ಸದ್ರಿ ವಿವಾಹ ಕಾರ್ಯವನ್ನು ಇದೇ ತಿಂಗಳು.......ನೇ ತಾರೀಕು......................ವಾರ  ರಾತ್ರಿ/ಬೆಳಿಗ್ಗೆ.................ಸಮಯಕ್ಕೆ ಸರಿಯಾಗಿ ಸಲ್ಲುವ ಶುಭ..................ಲಗ್ನದಲ್ಲಿ  ಧಾರಾಕಾರ್ಯವನ್ನು ವಧುವಿನ ಮನೆಯಲ್ಲಿ/ಕಲ್ಯಾಣ ಮಂಟಪದಲ್ಲಿ ನೆರವೇರಿಸುವಂತೆಯೂ ಗೌಡ ಸಮಾಜದ ಪದ್ಧತಿಯಂತೆ ವಿವಾಹ ಕಾರ್ಯವನ್ನು ಉಭಯಸ್ಥರು ಕೂಡಿ ಸಾಂಗವಾಗಿ ನೆರವೇರಿಸಿಕೊಳ್ಳುವಂತೆ ಈ ಕೆಳಗೆ ಸಹಿ ಮಾಡಿದವರ ಸಮಕ್ಷಮ ಒಪ್ಪಿ ಬರೆದ ಲಗ್ನ ಪತ್ರಿಕೆಗೆ ಶುಭಮಸ್ತು.

ಗೃಹಸ್ಥರ ರುಜು                                                                           ಕುಟುಂಬಸ್ಥರ ರುಜು

1.                                                                                                 1.

2.                                                                                                 2.

3.                                                                                                 3.


ಬರೆದವರ ರುಜು   


3.