Tuesday, September 10, 2024

ತುಪ್ಪ ತೆಗೆದುಕೊಂಡು ಬರುವಾಗ (ಶೋಭಾನೆ ಹಾಡು) -1

ಅರತಿ ಎತ್ತುವೆ ನಂದಗೋಕುಲದೊಳಗೆ ಆಡುವ ನಂದ ಗೋಪಿಯ
 ಕಂದನಿಗೆ ಬಂದು ಮಧುರೆಯಲ್ಲಿ ಮಾವನ ಕೊಂದು ಮಂಧರ ದರ ಗೋಪಾಲಗೆ 
ಕಂಕಣದಾರತಿಯಾ ಬೆಳಗೀರೆ ಶೋಭಾನೆ.
 ಚೆನ್ನಯ ಮನೆ ಮನೆ ಹಾಲು ಮೊಸರನು
 ಕದ್ದು ಕಣ್ಣ ಸನ್ನೆಯ ಮಾಡಿ ಕರೆದ ಕೃಷ್ಣಯ್ಯಗೆ 
ಹೊನ್ನಿನಾರತಿಯಾ ಬೆಳಗೀರೆ ಶೋಭಾನೆ
 ಜಲಜಾಕ್ಷಿಯರೆಲ್ಲರೂ ಜಲಕ್ರೀಡೆಯಾಡುವ ಸಮಯದೊಳು 
ಉಡುವ ಸೀರೆಯ ಕದ್ದು ಕಡಹದ ಮರವೇರಿ ಹುಡುಕು ಮಾಡುವ
 ನಮ್ಮ ಒಡೆಯ ಶ್ರೀಕೃಷ್ಣಯ್ಯಂಗೆ ಜಡಜದಾರತಿಯಾ ಬೆಳಗೀರೆ ಶೋಭಾನೆ.

No comments:

Post a Comment