Thursday, September 12, 2024

ತುಪ್ಪ ತೆಗೆದುಕೊಂಡು ಬರುವಾಗ (ಶೋಭಾನೆ ಹಾಡು) -2

 ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀಗಂಧ ಪರಿಮಳವು 
ಲೇಸಾಗಿ ಪದ್ಮ ಹಾವಿಗೆಯನ್ನು ಧರಿಸಿದ ವಾಸುದೇವನಿಗೂ
ಕಾಲಲ್ಲಿ ಕಿರುಗೆಜ್ಜೆ ನೀಲದ ಬಾವುಲಿ ನೀಲವರ್ಣದ 
ನಾಟಕಳ್ಹಾಕುವ ನಮ್ಮ ಭಾವಜನಯ್ಯ ಬಾಲ ಗೋಪಾಗೆ 
ನೀಲವರ್ಣನಿಗೆ ವನಿತೆ ಶ್ರೀಲಕ್ಷ್ಮೀಗೂ ನೀಲದಾರತೀಯಾ ಬೆಳಗೀರೆ ಶೋಭಾನೆ 
ಕುಂಕುಮ ಕಸ್ತೂರಿ ಪರಿ ಪರಿ ನಾಮ ಶಂಕ ಚಕ್ರವನ್ನೇ ಧರಿಸಿದ
 ನಮ್ಮ ಬಿಂಕದಿಂದಲಿ ನಾಟ್ಯವ ನಾಡುತಾಡುವ 
ಪಂಕಜ ನಾಭಗೆ ವನಿತೆ ಶ್ರೀಲಕ್ಷ್ಮೀಗೆ ಕುಂಕುಮಧಾರತೀಯಾ ಬೆಳಗೀರೆ ಶೋಭಾನೆ.
 ಹದಿನಾರು ಸಾವಿರ ಸ್ತ್ರೀಯರನೊಡಗೊಂಡು 
ಚದುರಂಗ ಪಗಡೆಯ ನಾಡಿದ ನಮ್ಮ ಮದನ ಮೋಹನ 
ದೇವ ಎಡೆಯಲಿ ಕೌಸ್ತುಭ ಮಧುಸೂದನನಿಗೆ 
ವನಿತೆ ಶ್ರೀಲಕ್ಷ್ಮೀ ಸುದತಿಯಾರತಿಯಾ ಬೆಳಗೀರೆ ಶೋಭಾನೆ 
ತೆತ್ತಿಸಕೋಟ ದೇವರ್ಕಳ ನೋಡಗೊಂಡು ಹಸ್ತವ 
ತಾರದೊಳಾಡಿದ ನಮ್ಮ ಸತ್ಯಭಾಮೆ ಪ್ರಿಯ ಪುರಂಧರ ವಿಠಲಗೆ 
ನಿತ್ಯೋತಮನಿಗೆ ವನಿತೆ ಶ್ರೀಲಕ್ಷ್ಮೀಗೆ ಮುತ್ತಿನಾರತಿಯಾ ಬೆಳಗೀರೆ ಶೋಭಾನೆ.
 ವನಿತೆ ಶ್ರೀಲಕ್ಷ್ಮೀಗೂ ಬಾಸಿಂಗದಾರತಿಯಾ ಬೆಳಗೀರೆ ಶೋಭಾನೆ 


No comments:

Post a Comment