Saturday, September 14, 2024

ಬಾಗಿಲ ತಡೆಯುವ ಹಾಡುಗಳು-1

 ಅಂದು ಗೋಕುಲದಿಂದಾ-ಬಂದ-ನಾರಾಯಣ ಕೃಷ್ಣಾ-1
ಮಂಟಪದ ನಡುಗಾಗಿ-ಬರುವ ಹಾಗೆನಣ್ಣಯ್ಯಾ!
 ಮಡದಿ ಬೆಡಗೆಂದು ಬರುತಾರೆ||
 ಮಡದಿ ಬೆಡಗೆಂದು ಬರುವಾಗ ಅಣ್ಣಯ್ಯಾ-I
 ತಂಗಿಯ ಕದಗಳಾ ತಡೆದಾಳು-–ತಂಗ್ಯಮ್ಮ
ನೀ-ತಡೆದಾ ಕದವಾ-ಬಿಡುಬೇಗಾ॥ ನಾ ತಡೆ ಕದಾ ಬಿಡಲಾರೆ! ಪ್ರತಿಯೊಂದು-ಮಾತು ನುಡಿಬೇಗಾ|| 
ದೇಶ ಉಂಬಳಿ ಕೊಡುವೆ! ಶೇಷ-ಉಪ್ಪರಿಗೆ ಕೊಡುವೆ- 
ನೀ ತಡೆದ ಕದಗಳಾ-ಬಿಡು ಬೇಗಾ||
ದೇಶ ಉಂಬಳಿ ನನಗುಂಟು! ಶೇಷ ಉಪ್ಪರಿಗೆ
 ನನಗುಂಟು! ಎನ್ನುವ ನೀನ ನನಗೆ-ಕೊಡುವೆನ್ನಮ್ಮಾ
 ಪ್ರೀತಿಗೊಂದು ಮಾತು ನುಡಿಬೇಗಾ||

No comments:

Post a Comment